Kannada

Fact Check: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಯಮುನಾ ನದಿಯಲ್ಲಿ ಆರತಿ ಆರಂಭವಾಗಿದೆಯೇ?

ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಜನರು ನದಿಯ ದಡದಲ್ಲಿ ಆರತಿ ಮಾಡುತ್ತಿರುವ ವೀಡಿಯೊ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಬಿಜೆಪಿ ಗೆದ್ದ ಬಳಿಕ ಯಮುನಾ ನದಿಯ ದಡದಲ್ಲಿ ಆರತಿ ಮಾಡಲಾಗುತ್ತಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ನಡೆದು, ಫಲಿತಾಂಶ ಫೆಬ್ರವರಿ 8 ರಂದು ಘೋಷಣೆಯಾಯಿತು. ಬಿಜೆಪಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಗೆದ್ದಿತು. ಈ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಜನರು ನದಿಯ ದಡದಲ್ಲಿ ಆರತಿ ಮಾಡುತ್ತಿರುವ ವೀಡಿಯೊ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ದೆಹಲಿಯಲ್ಲಿ ಬಿಜೆಪಿ ಗೆದ್ದ ಬಳಿಕ ಯಮುನಾ ನದಿಯ ದಡದಲ್ಲಿ ಆರತಿ ಮಾಡಲಾಗುತ್ತಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, "ದೆಹಲಿ ಮತ್ತೊಮ್ಮೆ ಇಂದ್ರಪ್ರಸ್ಥದತ್ತ ಸಾಗುತ್ತಿದೆ. ಕೇಜ್ರಿವಾಲ್ ನನ್ನು ದೂರವಿಟ್ಟು ಇನ್ನು ಒಂದು ವಾರವೂ ಕಳೆದಿಲ್ಲ, ಇಂದು ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿ ಪ್ರಾರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ಸೌತ್‌ಚೆಕ್ ಕಂಡುಕೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು 2024 ರಲ್ಲೇ ಯಮುನಾ ಆರತಿ ಪ್ರದರ್ಶಿಸಲು ಪ್ರಾರಂಭಿಸಲಾಗಿದೆ.

ಕೆಲ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ವೀಡಿಯೊ ದೆಹಲಿಯ ಕಾಶ್ಮೀರ್ ಗೇಟ್ ಪ್ರದೇಶದ ಬಳಿ ಇರುವ ಯಮುನಾ ಬ್ಯಾಂಕ್‌ನದು ಎಂದು ಹೇಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಸುಳಿವು ಪಡೆದು, ನಾವು ಸೂಕ್ತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ನ್ಯೂಸ್ 18 ಹಿಮಾಚಲ ಫೆಬ್ರವರಿ 13, 2025 ರಂದು ವೈರಲ್ ಆಗಿರುವ ವೀಡಿಯೊ ದೆಹಲಿಯ ಕಾಶ್ಮೀರಿ ಗೇಟ್ ಯಮುನಾ ಘಾಟ್‌ನಲ್ಲಿ ನಡೆದ ಯಮುನಾ ಆರತಿಯದ್ದಾಗಿದೆ ಎಂದು ಬರೆದುಕೊಂಡಿದೆ.

ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ಜನವರಿ 24, 2024 ರಂದು ಪ್ರಕಟಿಸಿದ ವರದಿಯ ಪ್ರಕಾರ, ದೆಹಲಿಯು ಕಾಶ್ಮೀರಿ ಗೇಟ್, ISBT ಎದುರು ನದಿಯ ಪಶ್ಚಿಮ ದಂಡೆಯಲ್ಲಿ ತನ್ನದೇ ಆದ ಘಾಟ್‌ಗಳನ್ನು ಹೊಂದಲಿದೆ ಎಂದು ವರದಿ ಸೂಚಿಸಿದೆ. ಅಲ್ಲಿ ಆರತಿ ಆಯೋಜಿಸಲಾಗುವುದು ಎಂದಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಲಲ್ಲಾ ದೇವಾಲಯದ ಪ್ರತಿಕೃತಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರಾರ್ಥನೆ ಸಲ್ಲಿಸಿದ ವಾಸುದೇವ್ ಘಾಟ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು.

ನಾವು Curly Tales ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಈ ವೀಡಿಯೊವನ್ನು ಕಂಡುಕೊಂಡಿದ್ದೇವೆ ಡಿಸೆಂಬರ್ 10, 2024 ರಂದು ಹಂಚಿಕೊಂಡು ಈ ವೀಡಿಯೊದಲ್ಲಿ ಕಾಶ್ಮೀರಿ ಗೇಟ್‌ನ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ತೋರಿಸಲಾಗಿದೆ. ಶೀರ್ಷಿಕೆಯು ಪ್ರತಿ ಭಾನುವಾರ ಮತ್ತು ಮಂಗಳವಾರ ಬೇಸಿಗೆಯಲ್ಲಿ ಸಂಜೆ 6:30 ಕ್ಕೆ ಮತ್ತು ಚಳಿಗಾಲದಲ್ಲಿ ಸಂಜೆ 6 ಗಂಟೆಗೆ ಆರತಿಯನ್ನು ನಡೆಸಲಾಗುತ್ತದೆ ಎಂದು ಸೂಚಿಸುತ್ತದೆ.

ಇದಲ್ಲದೆ, ಟ್ರಾವೆಲ್ ವೆಬ್‌ಸೈಟ್, ಟಸ್ಕ್ ಟ್ರಾವೆಲ್ ಸಹ ಯಮುನಾ ಆರತಿಯನ್ನು ಉಲ್ಲೇಖಿಸಲಾಗಿದೆ. ವಾಸುದೇವ್ ಘಾಟ್‌ನಲ್ಲಿರುವ ಯಮುನಾ ಆರತಿಯನ್ನು ಮಾರ್ಚ್ 12, 2024 ರಂದು ಡಿಡಿಎ ಉಪಾಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಮತ್ತು ಸುಭಾಶಿಶ್ ಪಾಂಡ ಉದ್ಘಾಟಿಸಿದರು ಎಂದು ಅದು ಉಲ್ಲೇಖಿಸಿದೆ. ಯಮುನಾ ನದಿಯ ಉದ್ದಕ್ಕೂ ವಜೀರಾಬಾದ್‌ನಿಂದ ಹಳೆಯ ರೈಲ್ವೆ ಸೇತುವೆಯವರೆಗೆ 66 ಹೆಕ್ಟೇರ್ ಘಾಟ್‌ಗಳನ್ನು ಪುನರುಜ್ಜೀವನಗೊಳಿಸುವ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ದ ಉಪಕ್ರಮದ ಭಾಗವಾಗಿ ವಾಸುದೇವ್ ಘಾಟ್ ಇದೆ.

ಇದಲ್ಲದೆ, ಯಮುನಾ ಆರತಿ ಹೊಸದಾಗಿ ಶುರುವಾಗಿರುವುದು ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇಂಡಿಯಾ ಟಿವಿಯಲ್ಲಿ ನವೆಂಬರ್ 13, 2015 ರಂದು ಪ್ರಕಟವಾದ 9 ವರ್ಷದ ಹಳೆಯ ವೀಡಿಯೊದಲ್ಲಿ, ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೊದಲ ಯಮುನಾ ಆರತಿಯನ್ನು ಗೀತಾ ಘಾಟ್‌ನಲ್ಲಿ ಆಯೋಜಿಸಿದ್ದರು ಮತ್ತು ನಡೆಸಿದ್ದರು ಎಂದು ಸೂಚಿಸುತ್ತದೆ. ಆದ್ದರಿಂದ, ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ನಾವು ಖಚಿತಪಡಿಸಿಕೊಳ್ಳಬಹುದು.

Fact Check: Hindu conference boycotted post SC’s order on UGC guidelines? No, image is AI-generated

Fact Check: മലയാളി സൈനിക ഉദ്യോഗസ്ഥന്റെ വീട്ടില്‍നിന്ന് കള്ളപ്പണം പിടികൂടിയ ദൃശ്യങ്ങള്‍? വീഡിയോയുടെ സത്യമറിയാം

Fact Check: தமிழக ஆசிரியரை மாணவன் தாக்கியதாகப் பரவும் காணொலி? இது தமிழ்நாட்டில் நடந்ததா

Fact Check: ಅಯತೊಲ್ಲ ಅಲಿ ಖಮೇನಿ ಅವರ ಅಂತಿಮ ಯಾತ್ರೆ ಎಂದು ಸಂಬಂಧವಿಲ್ಲದ ಹಳೇಯ ವೀಡಿಯೊ ವೈರಲ್

Fact Check: ఇరాన్ దాడుల్లో దుబాయ్ విమానాశ్రయం అగ్నికి ఆహుతైందా? లేదు, ఇదే అసలు నిజం