

ದೇವಸ್ಥಾನದಂತೆ ಕಾಣುವ ಸ್ಥಳದಲ್ಲಿ ವ್ಯಕ್ತಿಯೊಬ್ಬ ಕತ್ತಿ ಹಿಡಿದು ಕೆಲವು ಪುರುಷರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುವಾದದ ಹೇಳಿಕೆಗಳೊಂದಿಗೆ ವೈರಲ್ ಆಗುತ್ತಿದೆ. ಫೇಸ್ಬುಕ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರೊಬ್ಬರು, ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಮಧ್ಯಪ್ರದೇಶದ ದೇವಾಲಯವೊಂದಕ್ಕೆ ಕತ್ತಿಯೊಂದಿಗೆ ಪ್ರವೇಶಿಸಿ ಅಲ್ಲಿನ ಅರ್ಚಕರನ್ನು ಕೊಲ್ಲಲು ಯತ್ನಿಸಿದ್ದಾನೆ ಎಂದು ಬರೆದಿದ್ದಾರೆ. ಈ ಸ್ಥಳವನ್ನು ಮಧ್ಯಪ್ರದೇಶದ ಸೆಹೋರ್ನಲ್ಲಿರುವ ಚಿಂತಾಮನ್ ಗಣೇಶ ದೇವಾಲಯ ಎಂದು ಹೇಳಲಾಗಿದೆ.
ಪೋಸ್ಟ್ನ ಶೀರ್ಷಿಕೆ ಹೀಗಿದೆ, ‘‘ಇವನು ಭಾರತದ ಭಯಭೀತ ಮುಸ್ಲಿಂ. ಈತ ಹರಿತವಾದ ಆಯುಧದೊಂದಿಗೆ ದೇವಾಲಯಕ್ಕೆ ಪ್ರವೇಶಿಸಿ ಮಧ್ಯಪ್ರದೇಶದ ಸೆಹೋರ್ನ ಪ್ರಾಚೀನ ಚಿಂತಾಮನ್ ಗಣೇಶ ದೇವಾಲಯದ ಅರ್ಚಕನನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಹಿಂದೂ ದೇವಾಲಯಗಳು ಮತ್ತು ಅರ್ಚಕರ ಮೇಲೆ ಬಹಿರಂಗವಾಗಿ ದಾಳಿ ಮಾಡಲಾಗುತ್ತದೆ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ಈ ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ. ಆರೋಪಿ ಮಹೇಶ್ ಯಾದವ್ ಅಲ್ಲ. ವೈರಲ್ ಆಗಿರುವ ವೀಡಿಯೊದಲ್ಲಿರುವ ಆಕ್ರಮಣಕಾರನನ್ನು ಮಹೇಶ್ ಯಾದವ್ ಎಂದು ಗುರುತಿಸಲಾಗಿದೆ. ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಹುಡುಕಾಟ ನಡೆಸಿದಾಗ ಜುಲೈ 26, 2025 ರಂದು ನವಭಾರತ್ ಟೈಮ್ಸ್ ಪ್ರಕಟಿಸಿದ ಸುದ್ದಿ ವರದಿ ಸಿಕ್ಕಿತು.
ಈ ವರದಿಯು ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಹಂಚಿಕೊಂಡಿದೆ. ಇಲ್ಲಿರುವ ವೀಡಿಯೊವು ಎಡಿಟ್ ಆವೃತ್ತಿಯಾಗಿದ್ದು, ದೇವಾಲಯದ ಸಂಪೂರ್ಣ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ತೋರಿಸುತ್ತದೆ. ಇದು 30 ಸೆಕೆಂಡುಗಳ ಕಾಲದ ವೈರಲ್ ವೀಡಿಯೊ ಕ್ಲಿಪ್ನ 3 ನಿಮಿಷಗಳ ವಿಸ್ತೃತ ಆವೃತ್ತಿಯನ್ನು ಹೊಂದಿದೆ, ಜೊತೆಗೆ ಪೊಲೀಸರ ಹೇಳಿಕೆಯನ್ನು ತೋರಿಸುವ ಎರಡನೇ ಕ್ಲಿಪ್ ಅನ್ನು ಹೊಂದಿದೆ.
ವಿಸ್ತರಿಸಿದ ಮತ್ತು ಕತ್ತರಿಸದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆ ವ್ಯಕ್ತಿ ಕಾಗದದಲ್ಲಿ ಸುತ್ತಿದ ಕತ್ತಿಯೊಂದಿಗೆ ದೇವಾಲಯಕ್ಕೆ ಪ್ರವೇಶಿಸುವುದನ್ನು ತೋರಿಸಲಾಗಿದೆ. ಆತ ಕುರ್ಚಿಯಲ್ಲಿ ಕುಳಿತು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡಲು ಮುಂದಾಗುತ್ತಾನೆ. ಕೆಲವು ಕ್ಷಣಗಳ ನಂತರ, ಆ ವ್ಯಕ್ತಿ ಮತ್ತು ದೇವಾಲಯದಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಬಳಿಕ ಆತ ಕತ್ತಿಯನ್ನು ಝಳಪಿಸುತ್ತಿರುವುದನ್ನು ಮತ್ತು ಒಬ್ಬನನ್ನು ಹಿಂದಕ್ಕೆ ತಳ್ಳುವುದನ್ನು ಕಾಣಬಹುದು.
ವೀಡಿಯೊದ ಎರಡನೇ ಕ್ಲಿಪ್ನಲ್ಲಿರುವ ಪೊಲೀಸ್ ಅಧಿಕಾರಿ, ಗಣೇಶ ದೇವಸ್ಥಾನದ ಅರ್ಚಕ ಜಯಂತ್ ವಲ್ಲಭ ದುಬೆ ಅವರು ಮಂಡಿ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಮಹೇಶ್ ಯಾದವ್ ಎಂಬ ವ್ಯಕ್ತಿಯನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅದೇ ಘಟನೆಯನ್ನು ಬೇರೆ ಕೋನದಿಂದ ತೋರಿಸುವ ವೀಡಿಯೊವನ್ನು ಅಮರ್ ಉಜಾಲ ಅವರು ಜುಲೈ 28, 2025 ರಂದು ಸುದ್ದಿ ವೆಬ್ಸೈಟ್ನಲ್ಲಿ ಮತ್ತು ಇಂಡಿಯಾ ಟುಡೇ ಅವರು ಜುಲೈ 27, 2025 ರಂದು ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಿದೆ.
ಈ ಘಟನೆಯಲ್ಲಿ ಮಹೇಶ್ ಯಾದವ್ ಅವರನ್ನು ಆರೋಪಿ ಎಂದು ಹಿಂದಿ ನ್ಯೂಸ್ 18 ಲೇಖನ ಹೇಳಿದೆ.
ಘಟನೆಯ ಕುರಿತು ದೈನಿಕ್ ಭಾಸ್ಕರ್ ವರದಿಯ ಪ್ರಕಾರ, "ಅವರು (ಯಾದವ್) ಅರ್ಚಕರು ಹಣವನ್ನು ಹಿಂದಿರುಗಿಸಲಿಲ್ಲ ಎಂದು ಹೇಳಿದ್ದಾರೆ. ಯಾದವ್ ಹಣವನ್ನು ಮರಳಿ ಪಡೆಯಲು ದೇವಸ್ಥಾನಕ್ಕೆ ಹೋದರು" ಎಂದು ಹೇಳಲಾಗಿದೆ. 24 ಗಂಟೆಗಳ ಒಳಗೆ ಹಣ ಸಿಗದಿದ್ದರೆ ಮತ್ತೆ ದಾಳಿ ಮಾಡುವುದಾಗಿ ಯಾದವ್ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬರುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಯಾವುದೇ ವರದಿಗಳಲ್ಲಿ ಘಟನೆಯ ಬಗ್ಗೆ ಕೋಮು ಕೋನವನ್ನು ಉಲ್ಲೇಖಿಸಿಲ್ಲ ಅಥವಾ ಆರೋಪಿ ಮಹೇಶ್ ಯಾದವ್ ಮುಸ್ಲಿಂ ಎಂದು ಹೇಳಿಲ್ಲ. ಆದ್ದರಿಂದ, ವೈರಲ್ ಆಗಿರುವ ಈ ಹಕ್ಕು ಸುಳ್ಳು ಎಂದು ಸೌತ್ ಚೆಕ್ ತೀರ್ಮಾನಿಸಿದೆ.