Kannada

Fact Check: ಮುಂಬೈನಲ್ಲಿ ಚಲನ್ ನೀಡಿದ್ದಕ್ಕೆ ಮುಸ್ಲಿಮರು ಸಂಚಾರ ಪೊಲೀಸರನ್ನು ಥಳಿಸಿದ್ದಾರಾ?

ಈ ಹಕ್ಕು ದಾರಿತಪ್ಪಿಸುವಂತಿದೆ ಎಂದು ಸೌತ್ ಚೆಕ್ ಕಂಡುಕೊಂಡಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಘಟನೆ ಇತ್ತೀಚೆಗೆ ನಡೆದಿಲ್ಲ. ಇದು 2015 ರಲ್ಲಿ ದೆಹಲಿಯಲ್ಲಿ ನಡೆದ ಘಟನೆ ಆಗಿದೆ.

Vinay Bhat

ಇಬ್ಬರು ಸಂಚಾರ ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೇಲೆ ಕೆಲವರು ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಸಮವಸ್ತ್ರ ಧರಿಸಿದ ಸಂಚಾರ ಪೊಲೀಸರನ್ನು ಥಳಿಸುತ್ತಿದ್ದು, ನಂತರ ಮತ್ತೊಬ್ಬ ಪೊಲೀಸ್​ನನ್ನು ರಸ್ತೆಗೆ ತಳ್ಳಲಾಗಿದೆ. ಓಡಿಹೋಗುತ್ತಿದ್ದಂತೆಯೇ ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ದಾಳಿಕೋರರಲ್ಲಿ ಕೆಲವರು ಟೋಪಿಗಳನ್ನು ಧರಿಸಿರುವಂತೆ ಕಾಣುತ್ತಿದೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಿಂದೂಗಳು ನಮ್ಮ ಹಿಂದೂ ರಾಜಕಾರಣಿಗಳು ಎಚ್ಚೆತ್ತು ಕೊಳ್ಳುವುದು ಯಾವಾಗ? ಇದು ಅಲ್ಲೇಲ್ಲೋ ಪಾಕಿಸ್ತಾನದಲ್ಲಿ ನಡೆದ ಘಟನೆ ಅಲ್ಲ. ಇಲ್ಲೇ ಭಾರತದ ಮಹಾನ್ ನಗರಿ ಮುಂಬೈ ನಲ್ಲಿ ಪೊಲೀಸರು Fine ಹಾಕಿ ಚಲನ್ ಕೊಟ್ಟಿದ್ದಕ್ಕೆ ಮುಸ್ಲಿಮರು ಒಟ್ಟಿಗೆ ಸೇರಿ ಭಾರಿಸಿದ ವಿಡಿಯೋ ಇದು. ನೀವು ಹೇಳಿ ಭಾರತದಲ್ಲಿ ಇರುವುದು #ಅಂಬೇಡ್ಕರ್ ಸಂವಿಧಾನವಾ? #ಮುಸ್ಲಿಂರ #ಶರಿಯತ್ ಕಾನೂನಾ? ಬೆಂಗಳೂರಿನಲ್ಲಿ ಕೂಡ ಎರಡು ಘಟನೆಗಳು ಆಯ್ತು. ಒಂದು ದಲಿತ MLA ಅಖಂಡ ಶ್ರೀನಿವಾಸ್ ಮನೆ ಧ್ವಂಸ ಮಾಡಿ. ಕೆಜಿ ಹಳ್ಳಿ ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕಿದ್ದರು, ಮೈಸೂರು ಉದಯಗಿರಿ ಪೊಲೀಸರ ಮೇಲೆ ದಾಳಿ ಮಾಡಿದರು. ಇವೆರಡೂ ಘಟನೆಗಳ ಹಿಂದೆ ಇದ್ದದ್ದು ಮುಸ್ಲಿಮರ #SDPI ಮತ್ತು ಅವರನ್ನು ಇವತ್ತಿಗೂ ಕಾಪಾಡಲು ನಿಂತವರು Once Again Indian National Congress - Karnataka Indian National Congress. ಇಷ್ಟಾದರೂ ಆ ಪಕ್ಷದ ಪರವಾಗಿ ನಿಂತ ಹಿಂದೂಗಳು ಎಚ್ಚೆತ್ತು ಕೊಳ್ಳುವುದು ಯಾವಾಗ?’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ ನೋಡಬಹುದು.

Fact Check:

ಈ ಹಕ್ಕು ದಾರಿತಪ್ಪಿಸುವಂತಿದೆ ಎಂದು ಸೌತ್ ಚೆಕ್ ಕಂಡುಕೊಂಡಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಘಟನೆ ಇತ್ತೀಚೆಗೆ ನಡೆದಿಲ್ಲ. ಇದು 2015 ರಲ್ಲಿ ದೆಹಲಿಯಲ್ಲಿ ನಡೆದ ಘಟನೆ ಆಗಿದೆ.

ವೀಡಿಯೊ ಕೀ ಫ್ರೇಮ್ ರಿವರ್ಸ್ ಹುಡುಕಾಟದ ಮೂಲಕ, ಜುಲೈ 13, 2015 ರಂದು ಎಬಿಪಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ವೈರಲ್ ವೀಡಿಯೊ: ಸಂಚಾರ ನಿಯಮ ಉಲ್ಲಂಘಿಸುವವರು ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ದೆಹಲಿ ಪೊಲೀಸರನ್ನು ಹೇಗೆ ಥಳಿಸಿದ್ದಾರೆ ಎಂಬುದನ್ನು ವೀಕ್ಷಿಸಿ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊ ಕಂಡುಬಂದಿದೆ.

ವೀಡಿಯೊ ವಿವರಣೆಯ ಪ್ರಕಾರ, ಹೆಲ್ಮೆಟ್ ಇಲ್ಲದೆ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುತ್ತಿದ್ದಾಗ ಪೊಲೀಸರು ಅವರನ್ನು ತಡೆದಾಗ ಈ ಘಟನೆ ಸಂಭವಿಸಿದೆ. "ನಿಲ್ಲಿಸಿದ ತಕ್ಷಣ, ಅವರು ಹೆಡ್ ಕಾನ್ಸ್ಟೇಬಲ್ ಜೈ ಭಗವಾನ್ ಮತ್ತು ನಂತರ ಕಾನ್ಸ್ಟೇಬಲ್ ಮನೋಜ್ ಮೇಲೆ ಹಲ್ಲೆ ನಡೆಸಿದರು" ಎಂದು ಬರೆಯಲಾಗಿದೆ.

ಎನ್‌ಡಿಟಿವಿ ಇಂಡಿಯಾ ಈ ಘಟನೆಯ ಬಗ್ಗೆ ಯೂಟ್ಯೂಬ್‌ನಲ್ಲಿಯೂ ಸುದ್ದಿ ಪ್ರಸಾರ ಮಾಡಿತು. ಈ ವೀಡಿಯೊವನ್ನು ಜುಲೈ 14, 2015 ರಂದು "ದಾಳಿಕೋರರು ಸಂಚಾರ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ.

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಕ್ಕೆ ಅವರನ್ನು ಪೊಲೀಸರನ್ನು ತಡೆದರು. ಆಗ ಮೂವರು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬರೆಯಲಾಗಿದೆ.

ಈ ಘಟನೆಯ ಬಗ್ಗೆ ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ ಮತ್ತು ಜೀ ನ್ಯೂಸ್ ಕೂಡ ಲೇಖನಗಳನ್ನು ಪ್ರಕಟಿಸಿದವು. ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಜುಲೈ 13, 2015 ರಂದು ಕಾನ್‌ಸ್ಟೆಬಲ್‌ಗಳಾದ ಜೈ ಭಗವಾನ್ ಮತ್ತು ಮನೋಜ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಈ ವರದಿಗಳು ದೃಢಪಡಿಸುತ್ತವೆ. ದಾಳಿಕೋರರಾದ ​​ಶಹನವಾಜ್, ಅಮೀರ್ ಮತ್ತು ಸಗೀರ್ ಅಹ್ಮದ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಆದ್ದರಿಂದ, ವೈರಲ್ ಆಗುತ್ತಿರುವ ಹಕ್ಕುಗಳು ಸುಳ್ಳು ಎಂದು ಸೌತ್ ಚೆಕ್ ದೃಢಪಡಿಸುತ್ತದೆ.

Fact Check: BSF force shoots at Bangladeshis near West Bengal border? No, video is from Nepal

Fact Check: നടന്‍ ഇന്നസെന്റിന് അന്ത്യോപചാരമര്‍പ്പിക്കാന്‍ പിണറായി വിജയന്‍ എത്തിയത് 55 അകമ്പടി വാഹനങ്ങളുമായോ?

Fact Check: இந்தியாவில் முதல்முறையாக பெண்கள் பாதுகாப்பிற்காக டிரோன்களை பயன்படுத்த உள்ளதா தவெக அரசு?

Fact Check: ಮಗನು ವಯಸ್ಸಾದ ತಂದೆಯನ್ನು ಕ್ರೂರವಾಗಿ ಥಳಿಸಿದ್ದು ಸೊಸೆಯನ್ನು ಕೆಟ್ಟದಾಗಿ ನೋಡಿದ್ದಕ್ಕಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ

Fact Check: వైరల్ అవుతున్న వీడియో గాజియాబాద్ ఘటనకు సంబంధించినది కాదు