Kannada

Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಎಂದು ಪಂಜಾಬ್​ನ ವೀಡಿಯೊ ವೈರಲ್

ವೀಡಿಯೊದಲ್ಲಿ ಗುಂಪೊಂದು ವ್ಯಕ್ತಿಯನ್ನು ಕ್ರೂರವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಇದರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಮತ್ತೊಂದು ಹಿಂಸಾಚಾರದ ಘಟನೆಯನ್ನು ಚಿತ್ರಿಸಲಾಗಿದೆ ಎಂದು ಹೇಳಲಾಗಿದೆ.

Vinay Bhat

ಕಳೆದ ಡಿಸೆಂಬರ್ 29 ರಂದು ಬಾಂಗ್ಲಾದೇಶದ ಗಾರ್ಮೆಂಟ್ ಕಾರ್ಖಾನೆಯೊಳಗೆ ಸಹೋದ್ಯೋಗಿಯಿಂದ ಗುಂಡು ಹಾರಿಸಲ್ಪಟ್ಟ ಬಜೇಂದ್ರ ಬಿಸ್ವಾಸ್ ಅವರ ಹತ್ಯೆಯು ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಿಂಸಾಚಾರದ ಇತ್ತೀಚಿನ ಪ್ರವೃತ್ತಿಯಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊವೊಂದು ಅಂತಹ ಮತ್ತೊಂದು ಘಟನೆಯನ್ನು ತೋರಿಸುತ್ತದೆ ಎಂದು ಹೇಳುತ್ತದೆ.

ವೀಡಿಯೊದಲ್ಲಿ ಗುಂಪೊಂದು ವ್ಯಕ್ತಿಯನ್ನು ಕ್ರೂರವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಇದರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧದ ಮತ್ತೊಂದು ಹಿಂಸಾಚಾರದ ಘಟನೆಯನ್ನು ಚಿತ್ರಿಸಲಾಗಿದೆ ಎಂದು ಹೇಳಲಾಗಿದೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಹಿಂದುಗಳ ಪರಿಸ್ಥಿತಿ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಪಂಜಾಬ್‌ನ ಹೋಶಿಯಾರ್‌ಪುರದದ್ದಾಗಿದ್ದು, ಮಕ್ಕಳ ಅಪಹರಣಕಾರನ ಮೇಲೆ ಗುಂಪೊಂದು ದಾಳಿ ಮಾಡುತ್ತಿರುವುದನ್ನು ತೋರಿಸುತ್ತದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಇದೇ ವೀಡಿಯೊವನ್ನು ಡಿಸೆಂಬರ್ 14 2025, ಡಿಸೆಂಬರ್ 17 ಮತ್ತು ಡಿಸೆಂಬರ್ 21 ರಂದು ಪೋಸ್ಟ್ ಮಾಡಿರುವುದು ಸಿಕ್ಕಿದೆ. ಸಾಗರಜೀತ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಮಕ್ಕಳನ್ನು ಅಪಹರಣ ಮಾಡುತ್ತಿದ್ದ ಸಾಧುವನ್ನು ಥಳಿಸುತ್ತಿರುವ ವೀಡಿಯೊ ಎಂದು ಹೇಳಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಈ ವೀಡಿಯೊದ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ, ಅರಿಜಿತ್ ಸಾಗರ್ ಈ ವೀಡಿಯೊವನ್ನು ಸ್ವತಃ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ಅರಿಜಿತ್ ಸಾಗರ್ ಈ ಘಟನೆಗೆ ಸಂಬಂಧಿಸಿದ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ವರದಿಗಾರನೊಬ್ಬ ಈ ಘಟನೆಯನ್ನು ವರದಿ ಮಾಡುವುದನ್ನು ಕಾಣಬಹುದು, ಅದರಲ್ಲಿ ವರದಿಗಾರ ಪಂಜಾಬಿ ಭಾಷೆಯಲ್ಲಿ ಈ ವೀಡಿಯೊ ತಾಂಡಾ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಕಳ್ಳತನಕ್ಕೆ ಸಂಬಂಧಿಸಿದೆ ಎಂದು ವಿವರಿಸಿದ್ದಾರೆ.

ಅಲ್ಲಿಯೇಈ ವೀಡಿಯೊವನ್ನು the_voice_of_haryana ಎಂಬ ಇನ್‌ಸ್ಟಾಗ್ರಾಮ್ ಚಾನೆಲ್‌ಗೆ ಸಹ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊದ ವಿವರಣೆಯೊಂದಿಗೆ, "ಪಂಜಾಬ್‌ನ ತಾಂಡಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಕೆಲವರು ಸಾಧುವನ್ನು ಕ್ರೂರವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಸಾಧು ಮಗುವನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸುದ್ದಿ ಬೆಳಕಿಗೆ ಬಂದ ತಕ್ಷಣ, ಜನರು ಕೋಪಗೊಂಡು ಸಾಧುವನ್ನು ಹಿಡಿದು ನಿರ್ದಯವಾಗಿ ಹೊಡೆಯಲು ಪ್ರಾರಂಭಿಸಿದರು."

ಇಷ್ಟೇ ಅಲ್ಲದೆ ವೈರಲ್ ವೀಡಿಯೊದಲ್ಲಿ ಕಂಡುಬರುವ ಬೆಂಚುಗಳಲ್ಲಿ ಒಂದರ ಮೇಲೆ, "GIC Re" ಎಂದು ಬರೆದಿರುವ ಸ್ಟಿಕ್ಕರ್ ಅನ್ನು ನಾವು ಗಮನಿಸಿದ್ದೇವೆ. ಇದು ಭಾರತೀಯ ಜನರಲ್ ವಿಮಾ ನಿಗಮದ ಲೋಗೋ.

ಇನ್ನು ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರರ ​​ಪತ್ರಿಕಾ ವಿಭಾಗವು ಜನವರಿ 01 ರಂದು ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಅದು ವೀಡಿಯೊ ಬಾಂಗ್ಲಾದೇಶದ ಘಟನೆಯನ್ನು ತೋರಿಸುವುದಿಲ್ಲ ವಾಸ್ತವವಾಗಿ ಭಾರತದ್ದೇ ಎಂದು ಸ್ಪಷ್ಟಪಡಿಸುವ ಮೂಲಕ ವೈರಲ್ ಹೇಳಿಕೆಯನ್ನು ತಳ್ಳಿಹಾಕಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಒಬ್ಬ ವ್ಯಕ್ತಿಯನ್ನು ಗುಂಪೊಂದು ಕ್ರೂರವಾಗಿ ಥಳಿಸುತ್ತಿರುವುದನ್ನು ತೋರಿಸುವ ಈ ವೈರಲ್ ವೀಡಿಯೊ ಬಾಂಗ್ಲಾದೇಶದಿಂದಲ್ಲ, ಭಾರತದ ಪಂಜಾಬ್‌ನಿಂದ ಬಂದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: PM Modi ignores President Droupadi Murmu during Republic Day’s event? Here is the truth

Fact Check: സര്‍ക്കാര്‍ ആശുപത്രികളിലെ സൗകര്യങ്ങള്‍ കണ്ട് ആരോഗ്യമന്ത്രിയ്ക്ക് പ്രസവം നിര്‍ത്തിയ സ്ത്രീയുടെ കത്ത്? സത്യമറിയാം

Fact Check: தமிழக முதல்வர் குறித்து கேலிச் சித்திரம் வெளியிட்டதா ஜூனியர் விகடன் ஊடகம்?

Fact Check: ICE protest in US leads to arson, building set on fire? No, here are the facts

Fact Check: ಪುಣೆಯಲ್ಲಿ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಮಾಲೀಕನ ಜೊತೆಯಲ್ಲೇ ಕ್ರೇನ್​ನಲ್ಲಿ ಮೇಲಕ್ಕೆತ್ತಿದ ಪೊಲೀಸರು?, ಸತ್ಯ ಇಲ್ಲಿದೆ